ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್ಗಳ ನಂತರ ಹೀಗೆ ಹೇಳುತ್ತಿದ್ದರು...
ಮುಗೀರ ಬಿನ್ ಶುಅಬರ ಬರಹಗಾರರಾದ ವರ್ರಾದ್ರಿಂದ ವರದಿ. ಅವರು ಹೇಳುತ್ತಾರೆ: ಒಮ್ಮೆ ಮುಗೀರ ಬಿನ್ ಶುಅಬ ನನ್ನೊಂದಿಗೆ ಮುಆವಿಯಾರಿಗೆ ಹೀಗೆ ಪತ್ರ ಬರೆಯಲು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್ಗಳ ನಂತರ ಹೀಗೆ ಹೇಳುತ್ತಿದ್ದರು: “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್ತಯ್ತ ವಲಾ ಮುಅ್ತಿಯ ಲಿಮಾ ಮನಅ್ತ, ವಲಾ ಯನ್ಫಉ ದಲ್-ಜದ್ದಿ ಮಿನ್ಕಲ್ ಜದ್ದ್."
متفق عليه
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಕಡ್ಡಾಯ ನಮಾಝ್ಗಳ ನಂತರ, “ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು, ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಅ್ತಯ್ತ ವಲಾ ಮುಅ್ತಿಯ ಲಿಮಾ ಮನಅ್ತ, ವಲಾ ಯನ್ಫಉ ದಲ್-ಜದ್ದಿ ಮಿನ್ಕಲ್ ಜದ್ದ್" ಎಂದು ಹೇಳುತ್ತಿದ್ದರು.
ಇದರ ಅರ್ಥ: ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ ಎಂಬ ಏಕದೇವತ್ವದ ವಚನವನ್ನು ನಾನು ಅಂಗೀಕರಿಸಿ ಒಪ್ಪಿಕೊಳ್ಳುತ್ತೇನೆ. ಸತ್ಯವಾದ ಆರಾಧನೆಗಳೆಲ್ಲವನ್ನೂ ನಾನು ಅಲ್ಲಾಹನಿಗೆ ಮಾತ್ರ ದೃಢೀಕರಿಸುತ್ತೇನೆ ಮತ್ತು ಅಲ್ಲಾಹನ ಹೊರತಾದ ಎಲ್ಲರಿಗೂ ಅದನ್ನು ನಿರಾಕರಿಸುತ್ತೇನೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನಿಜವಾದ ಮತ್ತು ಸಂಪೂರ್ಣವಾದ ಸಾರ್ವಭೌಮತ್ವವು ಮತ್ತು ಭೂಮ್ಯಾಕಾಶಗಳಲ್ಲಿನ ಎಲ್ಲಾ ಸ್ತುತಿಗಳು ಅಲ್ಲಾಹನಿಗೆ ಮಾತ್ರ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ಅಲ್ಲಾಹು ಏನಾದರೂ ನೀಡಬೇಕೆಂದು ಅಥವಾ ನೀಡಬಾರದೆಂದು ನಿರ್ಧರಿಸಿದರೆ, ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಶ್ರೀಮಂತನ ಯಾವುದೇ ಶ್ರೀಮಂತಿಕೆ ಅವನ ಬಳಿ ಪ್ರಯೋಜನಪಡುವುದಿಲ್ಲ. ಅವನ ಬಳಿ ಪ್ರಯೋಜನಪಡುವುದು ಸತ್ಕರ್ಮಗಳು ಮಾತ್ರ.
Hadeeth benefits
ನಮಾಝ್ ನಿರ್ವಹಿಸಿದ ತಕ್ಷಣ ಈ ಪ್ರಾರ್ಥನೆಗಳನ್ನು ಪಠಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ಇದು ಏಕದೇವತ್ವ ಮತ್ತು ಸ್ತುತಿಯ ವಚನಗಳನ್ನು ಒಳಗೊಂಡಿದೆ.
ಸುನ್ನತ್ತನ್ನು ಅನುಸರಿಸಲು ಮತ್ತು ಪ್ರಚಾರ ಮಾಡಲು ತ್ವರೆ ಮಾಡಬೇಕೆಂದು ತಿಳಿಸಲಾಗಿದೆ.
Share
Use the QR code to easily share the message of Islam with others