- ನಮಾಝಿನಲ್ಲಿ ವಿನಮ್ರತೆ ಮತ್ತು ಹೃದಯ ಸಾನಿಧ್ಯತೆಯ ಪ್ರಾಮುಖ್ಯತೆಯನ್ನು ಮತ್ತು ಶೈತಾನನು ಗಲಿಬಿಲಿ ಮತ್ತು ಗೊಂದಲಗೊಳಿಸಲು ಅತಿಯಾಗಿ ಪ್ರಯತ್ನಿಸುತ್ತಾನೆಂದು ತಿಳಿಸಲಾಗಿದೆ.
- ಶೈತಾನನ ಪಿಸುಗುಡುವಿಕೆ ಅನುಭವಕ್ಕೆ ಬರುವಾಗ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿದು ಅಲ್ಲಾಹನಲ್ಲಿ ರಕ್ಷೆ ಬೇಡುವುದು ಅಪೇಕ್ಷಣೀಯವಾಗಿದೆ.
- ಸಹಾಬಿಗಳಿಗೆ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಯಾವುದಾದರೂ ಸಮಸ್ಯೆಗಳು ಎದುರಾದಾಗ, ಅವರು ಅವುಗಳ ಪರಿಹಾರಕ್ಕಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬರುತ್ತಿದ್ದ ರೆಂದು ವಿವರಿಸಲಾಗಿದೆ.
- ಸಹಾಬಿಗಳ ಹೃದಯ ಜೀವಂತಿಕೆಯನ್ನು ಮತ್ತು ಅವರ ಉದ್ದೇಶವು ಪರಲೋಕವಾಗಿತ್ತೆಂಬುದನ್ನು ತಿಳಿಸಲಾಗಿದೆ.