- ಮುಅಝ್ಝಿನ್ಗೆ ಉತ್ತರ ಕೊಡುವುದನ್ನು ಪ್ರೋತ್ಸಾಹಿಸಲಾಗಿದೆ.
- ಮುಅಝ್ಝಿನ್ಗೆ ಉತ್ತರ ಕೊಟ್ಟ ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಿದ ನಂತರ ಅವರಿಗೋಸ್ಕರ 'ವಸೀಲ' ಬೇಡಲು ಪ್ರೋತ್ಸಾಹಿಸಲಾಗಿದೆ.
- 'ವಸೀಲ'ದ ಅರ್ಥವನ್ನು, ಅದರ ಉನ್ನತ ಸ್ಥಾನವನ್ನು ಮತ್ತು ಅದು ಒಬ್ಬರಿಗೆ ಮಾತ್ರ ಸಿಗುತ್ತದೆಯೆಂದು ವಿವರಿಸಲಾಗಿದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಏಕೆಂದರೆ, ಆ ಉನ್ನತ ಸ್ಥಾನವನ್ನು ಅವರಿಗೆ ಮಾತ್ರ ವಿಶೇಷವಾಗಿ ಕಾದಿರಿಸಲಾಗಿದೆ.
- ಯಾರು ಪ್ರವಾದಿಗೋಸ್ಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಲ್ಲಿ 'ವಸೀಲ' ಬೇಡುತ್ತಾರೋ ಅವರಿಗೆ ಶಿಫಾರಸ್ಸು ದೊರೆಯುತ್ತದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಯವನ್ನು ವಿವರಿಸಲಾಗಿದೆ. ಏಕೆಂದರೆ, ಆ ಸ್ಥಾನವು ಅವರಿಗೆ ಮಾತ್ರ ಸೀಮಿತವಾಗಿದ್ದರೂ ಅವರು ಅದಕ್ಕಾಗಿ ಪ್ರಾರ್ಥಿಸಬೇಕೆಂದು ತಮ್ಮ ಸಮುದಾಯದೊಡನೆ ವಿನಂತಿಸಿದ್ದಾರೆ.
- ಅಲ್ಲಾಹನ ಮಹಾ ಔದಾರ್ಯ ಮತ್ತು ದಯೆಯನ್ನು, ಅಂದರೆ ಒಂದು ಸತ್ಕರ್ಮಕ್ಕೆ ಅದರ ಹತ್ತು ಪಟ್ಟು ಪ್ರತಿಫಲವನ್ನು ತಿಳಿಸಲಾಗಿದೆ.