- ಚಾಡಿ ಹೇಳುವುದು ಮತ್ತು ಮೂತ್ರದಿಂದ ತನ್ನನ್ನು ರಕ್ಷಿಸಿಕೊಳ್ಳದಿರುವುದು ಮಹಾಪಾಪಗಳಾಗಿದ್ದು ಸಮಾಧಿಯಲ್ಲಿ ಶಿಕ್ಷೆ ದೊರೆಯಲು ಕಾರಣವಾಗುತ್ತವೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವದ ಚಿಹ್ನೆಯನ್ನು ಪ್ರಕಟಪಡಿಸುವುದಕ್ಕಾಗಿ ಅಲ್ಲಾಹು ಸಮಾಧಿ ಶಿಕ್ಷೆಯಂತಹ ಕೆಲವು ಅದೃಶ್ಯ ವಿಷಯಗಳನ್ನು ತೋರಿಸಿಕೊಡುತ್ತಾನೆ.
- ಖರ್ಜೂರ ಮರದ ಕೊಂಬೆಯನ್ನು ತುಂಡು ಮಾಡಿ ಸಮಾಧಿಗಳ ಮೇಲೆ ನೆಟ್ಟ ಈ ಪ್ರಕ್ರಿಯೆಯು ವಿಶೇಷವಾಗಿ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತ್ರ ಸೀಮಿತವಾಗಿದೆ. ಏಕೆಂದರೆ ಅಲ್ಲಾಹು ಸಮಾಧಿಯಲ್ಲಿರುವವರ ಸ್ಥಿತಿಯನ್ನು ಅವರಿಗೆ ತಿಳಿಸಿದ್ದನು. ಇದಕ್ಕೆ ಹೋಲಿಕೆ (ಕಿಯಾಸ್) ಮಾಡಿಕೊಂಡು ಬೇರೆ ಸಮಾಧಿಗಳ ಮೇಲೆ ಗಿಡಗಳನ್ನು ನೆಡಬಾರದು. ಏಕೆಂದರೆ, ಆ ಸಮಾಧಿಗಳಲ್ಲಿರುವವರ ಸ್ಥಿತಿ ಏನೆಂದು ಯಾರಿಗೂ ತಿಳಿದಿಲ್ಲ.