- ಇದರ ಉದ್ದೇಶ ಪವಿತ್ರ ಕಅಬಾಲಯವನ್ನು ಗೌರವಿಸುವುದು ಮತ್ತು ಆದರಿಸುವುದಾಗಿದೆ.
- ಮಲಮೂತ್ರ ವಿಸರ್ಜನೆ ಮಾಡುವ ಸ್ಥಳದಿಂದ ಹೊರಬಂದ ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸಬೇಕಾಗಿದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಬೋಧನಾ ಶೈಲಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಅವರು ನಿಷೇಧದ ಬಗ್ಗೆ ಪ್ರಸ್ತಾಪಿಸಿದ ನಂತರ ಅದರ ಧರ್ಮಸಮ್ಮತ ಮಾರ್ಗವನ್ನು ಕೂಡ ತಿಳಿಸಿದ್ದಾರೆ.