/ ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ...

ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ...

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹಗಲಿನಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ರಾತ್ರಿಯಲ್ಲಿ ಕೈ ಚಾಚುತ್ತಾನೆ. ರಾತ್ರಿಯಲ್ಲಿ ಪಾಪ ಮಾಡಿದವನ ಪಶ್ಚಾತ್ತಾಪವನ್ನು ಸ್ವೀಕರಿಸಲು ಹಗಲಿನಲ್ಲಿ ಕೈ ಚಾಚುತ್ತಾನೆ. ಎಲ್ಲಿಯವರೆಗೆಂದರೆ, ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ದಾಸನು ಹಗಲಿನಲ್ಲಿ ಪಾಪ ಮಾಡಿ ರಾತ್ರಿ ಪಶ್ಚಾತ್ತಾಪಪಟ್ಟರೆ ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅವನು ರಾತ್ರಿಯಲ್ಲಿ ಪಾಪ ಮಾಡಿ ಹಗಲು ಪಶ್ಚಾತ್ತಾಪಪಟ್ಟರೆ ಅಲ್ಲಾಹು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಪಶ್ಚಾತ್ತಾಪದ ಬಗ್ಗೆ ಹರ್ಷ ವ್ಯಕ್ತಪಡಿಸುವ ಮತ್ತು ಅದನ್ನು ಸ್ವೀಕರಿಸುವ ರೂಪದಲ್ಲಿ ತನ್ನ ಕೈಗಳನ್ನು ಚಾಚುತ್ತಾನೆ. ಭೂಲೋಕವು ಅಂತ್ಯವಾಗಿದೆ ಎಂಬ ಘೋಷಣೆಯ ರೂಪದಲ್ಲಿ ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪಶ್ಚಾತ್ತಾಪದ ಬಾಗಿಲು ತೆರೆದಿರುತ್ತದೆ. ಸೂರ್ಯ ಪಶ್ಚಿಮದಿಂದ ಉದಯವಾಗಿ ಬಿಟ್ಟರೆ ಪಶ್ಚಾತ್ತಾಪದ ಬಾಗಿಲು ಮುಚ್ಚುತ್ತದೆ.

Hadeeth benefits

  1. ಪಶ್ಚಾತ್ತಾಪದ ಬಾಗಿಲು ತೆರೆದಿರುವ ತನಕ ಪಶ್ಚಾತ್ತಾಪವು ಸ್ವೀಕಾರವಾಗುತ್ತದೆ. ಸೂರ್ಯ ಪಶ್ಚಿಮ ದಿಕ್ಕಿನಿಂದ ಉದಯವಾಗುವಾಗ ಅದರ ಬಾಗಿಲು ಮುಚ್ಚುತ್ತದೆ. ಅದೇ ರೀತಿ, ಮನುಷ್ಯನು ಸಾವಿನ ಗೊರ ಗೊರ ಶಬ್ಧ ಉಂಟಾಗುವುದಕ್ಕೆ ಮೊದಲು ಪಶ್ಚಾತ್ತಾಪ ಪಡಬೇಕು. ಅಂದರೆ, ಆತ್ಮವು ಗಂಟಲಿಗೆ ತಲುಪುವುದಕ್ಕೆ ಮೊದಲು.
  2. ಪಾಪಗಳ ಕಾರಣದಿಂದ ನಿರಾಸೆ ಅಥವಾ ಹತಾಶೆ ಉಂಟಾಗಬಾರದು. ಏಕೆಂದರೆ, ಸರ್ವಶಕ್ತನಾದ ಅಲ್ಲಾಹನ ಕ್ಷಮೆ ಮತ್ತು ಕರುಣೆ ವಿಶಾಲವಾಗಿದೆ ಮತ್ತು ಪಶ್ಚಾತ್ತಾಪದ ಬಾಗಿಲು ತೆರೆದುಕೊಂಡಿದೆ.
  3. ಪಶ್ಚಾತ್ತಾಪದ ಷರತ್ತುಗಳು: ಒಂದು: ಪಾಪವನ್ನು ಸಂಪೂರ್ಣವಾಗಿ ವರ್ಜಿಸುವುದು. ಎರಡು: ಅದನ್ನು ಎಸಗಿದ್ದಕ್ಕಾಗಿ ವಿಷಾದಿಸುವುದು. ಮೂರು: ಅದನ್ನು ಮತ್ತೆ ಎಂದಿಗೂ ಆವರ್ತಿಸುವುದಿಲ್ಲವೆಂದು ದೃಢ ನಿರ್ಧಾರ ತಳೆಯುವುದು. ಇವೆಲ್ಲವೂ ಪಾಪವು ಅಲ್ಲಾಹನ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದ್ದರೆ ಮಾತ್ರ. ಆದರೆ ಅದು ಮನುಷ್ಯರ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದ್ದರೆ, ಪಶ್ಚಾತ್ತಾಪವು ಸಿಂಧುವಾಗಲು ಆ ಮನುಷ್ಯನ ಹಕ್ಕನ್ನು ಸಂದಾಯ ಮಾಡಬೇಕು ಅಥವಾ ಅವನು ಅದನ್ನು ಕ್ಷಮಿಸಬೇಕು ಎಂಬ ಷರತ್ತಿದೆ.