- ಈ ಹದೀಸ್ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದಾಗಿದೆ. ಏಕೆಂದರೆ, ಇದು ಸಮುದಾಯದಲ್ಲಿ ಸಂಭವಿಸಲಿರುವ ಘಟನೆಯನ್ನು ವಿವರಿಸುತ್ತದೆ. ಅದು ಹಾಗೆಯೇ ಸಂಭವಿಸಿದೆ.
- ಪರೀಕ್ಷೆಗೆ ಒಳಗಾಗುವವರಿಗೆ ಅವರಿಗೆ ಎದುರಾಗುವ ಪರೀಕ್ಷೆಗಳ ಬಗ್ಗೆ ಮುಂದಾಗಿ ತಿಳಿಸಲು ಅನುಮತಿಯಿದೆ. ಇದು ಆ ಪರೀಕ್ಷೆ ಬಂದಾಗ ಅವರು ಮನಸ್ಸನ್ನು ಗಟ್ಟಿ ಮಾಡಿ, ಸಹನೆಯಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ಇರಲೆಂದಾಗಿದೆ.
- ಕುರ್ಆನ್ ಮತ್ತು ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳುವುದರಿಂದ ಪರೀಕ್ಷೆಗಳು ಹಾಗೂ ಭಿನ್ನಾಭಿಪ್ರಾಯಗಳಿಂದ ಪಾರಾಗಬಹುದು.
- ಒಳಿತಿನ ಕಾರ್ಯಗಳಲ್ಲಿ ಆಡಳಿತಗಾರರ ಮಾತನ್ನು ಕೇಳಬೇಕು ಮತ್ತು ಅನುಸರಿಸಬೇಕು, ಅವರಿಂದ ಅನ್ಯಾಯ ಸಂಭವಿಸಿದರೂ ಅವರ ವಿರುದ್ಧ ದಂಗೆಯೇಳಬಾರದು ಎಂದು ಒತ್ತಿಹೇಳಲಾಗಿದೆ.
- ಪರೀಕ್ಷೆಗಳ ಸಮಯದಲ್ಲಿ ವಿವೇಚನೆಯನ್ನು ಬಳಸಬೇಕು ಮತ್ತು ಸುನ್ನತ್ತನ್ನು ಅನುಸರಿಸಬೇಕು.
- ಅನ್ಯಾಯವಾದರೂ ಸಹ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
- "ಎರಡು ಕೆಡುಕುಗಳಲ್ಲಿ ಅತ್ಯಂತ ಚಿಕ್ಕ ಕೆಡುಕನ್ನು ಮತ್ತು ಎರಡು ಹಾನಿಗಳಲ್ಲಿ ಅತ್ಯಂತ ಕಡಿಮೆ ಹಾನಿಯಿರುವುದನ್ನು ಆರಿಸಬೇಕು" ಎಂಬ ಸಿದ್ಧಾಂತಕ್ಕೆ ಇದರಲ್ಲಿ ಪುರಾವೆಯಿದೆ.