- ಆಣೆ ಮಾಡುವ ಮೂಲಕ ಗೌರವ ತೋರಬೇಕಾದದ್ದು ಸರ್ವಶಕ್ತನಾದ ಅಲ್ಲಾಹನಿಗೆ ಮಾತ್ರ. ಆದ್ದರಿಂದ ಅಲ್ಲಾಹನ ಮೇಲೆ, ಅವನ ಹೆಸರುಗಳು ಮತ್ತು ಗುಣಲಕ್ಷಣಗಳ ಮೇಲೆಯೇ ಹೊರತು ಆಣೆ ಮಾಡಬಾರದು.
- ಒಳಿತನ್ನು ಆದೇಶಿಸಲು ಮತ್ತು ಕೆಡುಕನ್ನು ವಿರೋಧಿಸಲು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ತೋರುತ್ತಿದ್ದ ಉತ್ಸಾಹವನ್ನು ಈ ಹದೀಸಿನಲ್ಲಿ ಕಾಣಬಹುದು. ವಿಶೇಷವಾಗಿ, ವಿರೋಧಿಸಲಾಗುವ ವಿಷಯವು ಬಹುದೇವತ್ವ ಅಥವಾ ಸತ್ಯನಿಷೇಧಕ್ಕೆ ಸಂಬಂಧಿಸಿದ್ದಾಗಿದ್ದರೆ.