- ಧರ್ಮವನ್ನು ಬಿಗಿಯಾಗಿ ಹಿಡಿಯುವುದು ಮತ್ತು ಅಡ್ಡಿಗಳು ತಡೆಯಾಗಿ ಬರುವ ಮೊದಲು ಸತ್ಕರ್ಮಗಳನ್ನು ನಿರ್ವಹಿಸಲು ಧಾವಿಸುವುದು ಕಡ್ಡಾಯವಾಗಿದೆ.
- ಅಂತ್ಯಕಾಲದಲ್ಲಿ ದಾರಿ ತಪ್ಪಿಸುವಂತಹ ಪರೀಕ್ಷೆಗಳು ನಿರಂತರವಾಗಿ ಬರುತ್ತವೆ ಮತ್ತು ಒಂದು ಪರೀಕ್ಷೆಯು ಮುಗಿದ ತಕ್ಷಣ ಅದರ ಹಿಂದೆಯೇ ಇನ್ನೊಂದು ಪರೀಕ್ಷೆಯು ಬರಲಿದೆಯೆಂದು ಸೂಚನೆ ನೀಡಲಾಗಿದೆ.
- ಒಬ್ಬ ವ್ಯಕ್ತಿಯ ಧಾರ್ಮಿಕತೆಯು ದುರ್ಬಲವಾಗಿದ್ದರೆ ಮತ್ತು ಅವನು ಹಣ ಅಥವಾ ಇತರ ಭೌತಿಕ ಲಾಭಗಳಿಗೆ ಬದಲಾಗಿ ತನ್ನ ಧರ್ಮವನ್ನು ಉಪೇಕ್ಷಿಸಿದರೆ, ಇದು ಅವನು ದಾರಿತಪ್ಪಲು, ಧರ್ಮವನ್ನು ತ್ಯಜಿಸಲು ಮತ್ತು ಪರೀಕ್ಷೆಗಳಿಗೆ ಬಲಿಯಾಗಲು ಕಾರಣವಾಗುತ್ತದೆ.
- ಸತ್ಕರ್ಮಗಳು ಪರೀಕ್ಷೆಗಳಿಂದ ಪಾರಾಗಲು ಕಾರಣವಾಗುತ್ತವೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ.
- ಪರೀಕ್ಷೆಗಳು ಎರಡು ವಿಧಗಳಲ್ಲಿವೆ: ಸಂಶಯಾತ್ಮಕ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆಗಳು—ಇದಕ್ಕೆ ಮದ್ದು ಜ್ಞಾನವನ್ನು ಸಂಪಾದಿಸುವುದು. ಮೋಹಗಳಿಗೆ ಸಂಬಂಧಿಸಿದ ಪರೀಕ್ಷೆಗಳು—ಇದಕ್ಕೆ ಮದ್ದು ಸತ್ಯವಿಶ್ವಾಸ ಮತ್ತು ತಾಳ್ಮೆ.
- ಕರ್ಮಗಳು ಕಡಿಮೆಯಿರುವವರು ಬೇಗ ಪರೀಕ್ಷೆಗಳಿಗೆ ಗುರಿಯಾಗುತ್ತಾರೆ ಮತ್ತು ಕರ್ಮಗಳು ಹೆಚ್ಚಿರುವವರು ತಮ್ಮ ಕರ್ಮಗಳಿಂದ ವಂಚಿತರಾಗದೆ ಅತ್ಯಧಿಕ ಕರ್ಮಗಳನ್ನು ನಿರ್ವಹಿಸಬೇಕೆಂದು ಈ ಹದೀಸ್ ಸೂಚಿಸುತ್ತದೆ.