- ಆಹಾರ ಸೇವಿಸಿದ ನಂತರ ಅಲ್ಲಾಹನನ್ನು ಸ್ತುತಿಸುವುದು ಅಪೇಕ್ಷಣೀಯವಾಗಿದೆ.
- ಅಲ್ಲಾಹನಿಗೆ ದಾಸರ ಮೇಲಿರುವ ಮಹಾ ಔದಾರ್ಯವನ್ನು ತಿಳಿಸಲಾಗಿದೆ. ಏಕೆಂದರೆ, ಅವನು ಅವರಿಗೆ ಜೀವನೋಪಾಯವನ್ನು ಒದಗಿಸುತ್ತಾನೆ, ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುತ್ತಾನೆ ಮತ್ತು ಅದರಲ್ಲಿ ಅವರ ಪಾಪಗಳಿಗೆ ಪರಿಹಾರವನ್ನೂ ಇಟ್ಟಿದ್ದಾನೆ.
- ಮನುಷ್ಯರಿಗೆ ಸಂಬಂಧಿಸಿದ ಎಲ್ಲವೂ ಅಲ್ಲಾಹನಿಂದಲೇ ಆಗಿದೆ. ಅದು ಅವರ ಶಕ್ತಿ ಅಥವಾ ಸಾಮರ್ಥ್ಯದಿಂದಲ್ಲ. ಕಾರ್ಯಕಾರಣಗಳನ್ನು ಅವಲಂಬಿಸಲು ಮನುಷ್ಯರಿಗೆ ಆಜ್ಞಾಪಿಸಲಾಗಿದೆ.